ಮಂಗಳವಾರ, ಫೆಬ್ರವರಿ 28, 2017

ಯುವ ಬಳಗದ ಸಾರ್ಥಕ ಕೆಲಸ.

ಕುಮಟಾದ ಬರ್ಗಿಯಲ್ಲಿ ಆಗ ತಾನೇ ಸೂರ್ಯ ಹುಟ್ಟುವ ಮುಂಚೆ ಒಂದು ಆಘಾತಕಾರಿ ಯಾರೂ ಕೂಡ ಊಹಿಸಲು ಅಸಾಧ್ಯವಾದ ಒಂದು ಘಟನೆ ನಡೆದುಹೋಗಿತ್ತು. ಗ್ಯಾಸ್ ಟ್ಯಾಂಕರ್ ಅಪಘಾತದಿಂದ ಒಂದು ಕುಟುಂಬವೇ ಇನ್ನಿಲ್ಲವಾಗಿತ್ತು. ಇಡೀ ಊರಿಗೇ ಊರೇ ಮುಂಜಾನೆಯೇ ಈ ಘಟನೆಯಿಂದ ಬೆಚ್ಚಿಬಿದ್ದಿತ್ತು. ಅಂದು ಸಾವನ್ನಪ್ಪಿದ್ದವರಲ್ಲಿ ಗ್ರಾಮ ಒಕ್ಕಲು ಸಮಾಜದ ಕುಟುಂಬವೇ ಒಂದು. ಆ ಘಟನೆಯ ತರುವಾಯ ಗ್ರಾಮ ಒಕ್ಕಲು ಸಮಾಜದಲ್ಲಿ ಯುವ ಶಕ್ತಿ ಒಂದಾಗಬೇಕೆಂದು ಕೆಲ ಯುವ ಮನಸ್ಸುಗಳು ತೀರ್ಮಾನ ಮಾಡಿ "ಗ್ರಾಮ ಒಕ್ಕಲು ಯುವ ಬಳಗ" ಎಂಬ ಸಂಘಟನೆಯನ್ನು ಕಟ್ಟಿಕೊಂಡು ಸಮಾಜದ ಬಂಧು ಭಾಂಧವರ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿತು. ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಧನ ಹಾಗೇ ಅವಶ್ಯಕ ಸಂದರ್ಭಗಳಲ್ಲಿ ರಕ್ತ ದಾನ ಮಾಡಿ ಇನ್ನೊಂದು ಜೀವವನ್ನು ಉಳಿಸುವ ಮಹಾತ್ಕಾರ್ಯ ಮಾಡಿರೋದು ಅಭಿನಂದನಿಯ. ಇಂತಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿರುವ ಈ ಯುವ ಬಳಗ ಮದ್ಗುಣಿ ಸಂಘದ ಸಹಕಾರದ ಜೊತೆಗೆ ಸೇರಿ ಅಪಘಾತ ನಿಧಿ ಇನ್ನಷ್ಟು ಕ್ರೋಢೀಕರಿಸಲು "ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ"ಯನ್ನು ಅಯೋಜಿಸಿ ಅತ್ಯಂತ ಯಶಸ್ವಿಯಾಗಿ ನಡೆಸಿ ಸಮಾಜದ ಹಿರಿಯರ ಹಾಗೂ ಹಿತೈಷಿಗಳಿಂದ ಹೊಗಳುವಿಕೆಗೆ ಕಾರಣವಾಯಿತು. ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಉತ್ಕಟವಾದ ಕನಸನ್ನು ಹೊತ್ತಿರುವ ಯುವ ಬಳಗದ ಶ್ರಮ ನಿಜಕ್ಕೂ ಸಾರ್ಥಕ ಆಯಿತು. ಯುವ ಬಳಗದ ಜೊತೆ ಹಗಲಿರುಳು ಶ್ರಮೀಸಿದ ಮದ್ಗುಣಿ ಯುವಕ ಸಂಘದ ಎಲ್ಲಾ ಸದಸ್ಯರು ಅಭಿನಂದನೆಗೆ ಅರ್ಹರಾಗಿದ್ದಾರೆ. ನಿಮ್ಮ ಶ್ರಮಕ್ಕೆ ಆ ದೇವರು ಖಂಡಿತ ಒಳ್ಳೆಯದು ಮಾಡುತ್ತಾನೆ. ನಿಮ್ಮ ಈ ಸೇವೆ ಹೀಗೆ ಮುಂದುವರೆಯಲಿ. ಹಾಗೇ ವಾಲಿಬಾಲ್ ಪಂದ್ಯಾವಳಿಗೆ ಯಶಸ್ಸಿಗೆ ಕಾರಣರಾದ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ನಿಮ್ಮನ್ನು ಮರೆಯಲು ಆದಿತೇ.. ಆಟ ಒಂದೇ ಅಲ್ಲ ಇನ್ನೂ ಮುಂದೆ ಯುವ ಬಳಗದ ಉದ್ದೇಶ ಹಾಗೂ ಮುಂದಿನ ಕಾರ್ಯಗಳಲ್ಲಿ ನಿಮ್ಮ ಕೈ ಜೋಡಿಸಿ ..
ನಮ್ಮ ಸಮಾಜವನ್ನು ಈ ಜಗತ್ತಿಗೆ ಪರಿಚಯಿಸೋಣ. ಏನಂತೀರಾ...

ಧನ್ಯವಾದಗಳೊಂದಿಗೆ..

ನಿಮ್ಮ ಪ್ರವೀಣ ಕಾಗಾಲ.
ಬೆಂಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ