ಸೋಮವಾರ, ಸೆಪ್ಟೆಂಬರ್ 25, 2017

ಗ್ರಾಮ ಒಕ್ಕಲು ಯುವ ಬಳಗ ಕುಮಟಾ

ಹುಟ್ಟಿದ ಮೇಲೆ  ಏನಾದರೂ ಸಾಧಿಸಬೇಕು. ನಮ್ಮ ಹೆಸರು ಮುಂದಿನ ತಲೆಮಾರಿನ ಜನರು ನೆನಪಿಸಿಕೊಳ್ಳಬೇಕು. ಹೌದು..!!!
ಇಂತಹ ಸದುದ್ದೇಶ ಇಟ್ಟುಕೊಂಡು ಜನ್ಮತಾಳಿದ ಒಂದು ಒಳ್ಳೆಯ ಮನಸ್ಸಿನ ಸಮಾನ ಮನಸ್ಕರಿಂದ ಕೂಡಿದ ತಂಡವೇ ಈ "ಗ್ರಾಮ ಒಕ್ಕಲು ಯುವ ಬಳಗ". ನಿಜಕ್ಕೂ ಸಮಾಜ ಹೆಮ್ಮೆಪಟ್ಟುಕೊಳ್ಳುವಂತಹ ಸಾಧನೆ ಮಾಡುತ್ತಿದೆ. ಜನ್ಮ ತಾಳಿ ಆಗಲೇ ಒಂದು ವರ್ಷ ಕಳೆದಿದೆ. ಸಮಾಜಕ್ಕೆ ಈ ಕಡಿಮೆ ಸಮಯದಲ್ಲಿಯೇ ಉಪಯೋಗಕಾರಿ ಆಗುವಂತಹ ಕೆಲಸ ಮಾಡಿರುವುದು ತುಂಬಾನೆ..!
ಸಮಾಜದ ಜನರಿಗೆ ಒಳಿತು ಆಗಬೇಕು ಎಂಬ ಧ್ಯೇಯ ಇಟ್ಟುಕೊಂಡು ಇಲ್ಲಿಯವರೆಗೆ ಸಮಾಜದ ಜನರಿಗೆ ಅವಶ್ಯಕತೆ ಇರುವ ಅನೇಕ ಕೆಲಸ ಮಾಡಿದೆ.  ಅದರಲ್ಲಿ  ಮುಖ್ಯವಾದುದು. ಅಪಘಾತದಿಂದ ಗಾಯಾಳು ಆದವರಿಗೆ ಚಿಕಿತ್ಸೆ ಕೊಡಿಸಲು ಸಹಾಯ ಧನ ಕೊಡೋದು. ಅದು ಎಷ್ಟೇ ಆಗಿರಲಿ. ಈ ತರಹದ ಸಮಾಜಮುಖಿ ಕೆಲಸ ಮಾಡೋ ಮನಸ್ಸು ಯಾರಿಗು ಇರಲ್ಲ. ಅದನ್ನು ಹೋಗಲಾಡಿಸಿ ಈ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಇದು ಹೀಗೆ ಮುಂದುವರೆಯಲಿ..
ಹಾಗೇ ಇನ್ನೊಂದು ಪ್ರಮುಖ ಕೆಲಸ ಮಾಡಿದ್ದು ರಕ್ತದಾನ. ಒಂದು ಜೀವವನ್ನು ಉಳಿಸುವ ಪುಣ್ಯದ ಕೆಲಸ. ಇಲ್ಲಿಯವರೆಗೆ ಸುಮಾರು ಜನರಿಗೆ ಯುವ ಬಳಗದ ಸದಸ್ಯರು ರಕ್ತ ನೀಡಿ ಪ್ರಾಣ ಉಳಿಸಿದ್ದಾರೆ. ರಕ್ತ ನೀಡಲು ಮುಂದೆ ಬಂದ ಎಲ್ಲರೂ ಕೂಡ ಈ ಅಭಿನಂದನೆಗೆ ಅರ್ಹರು. ನಿಮ್ಮ ಈ ಮಾನವೀಯತೆಯ ಕಾಳಜಿಗೆ ವಂದನೆ. ನಿಮ್ಮ ಸಹಕಾರ ಹೀಗೆ  ಇರಲಿ.
ಇನ್ನೂ ಅನೇಕ ಸಮಾಜಮುಖಿ ಕೆಲಸ ಮಾಡಿದ ಯುವ ಬಳಗ ಇತ್ತೀಚೆಗೆ ಅಷ್ಟೇ ಹೊದಿಕೆಶಿರೂರು ಗ್ರಾಮದಲ್ಲಿ ಸಮಾಲೋಚನೆ ಸಭೆ ಹಾಗೂ ಉಚಿತ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ಮಾಡಿ ಮತ್ತೊಂದು ಸಮಾಜ ಮೆಚ್ಚುವ ಕೆಲಸಕ್ಕೆ ಮುನ್ನುಡಿ ಬರೆಯಿತು. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಯುವಮಿತ್ರರಿಗೂ ಎಷ್ಟು ಕೃತಜ್ಞತೆ ಹೇಳಿದರು ಸಾಲದು.
ನಿಮ್ಮೆಲ್ಲರ ಇದೇ ತರಹದ ಸಹಾಯ ಸಹಕಾರ ಇದ್ದರೆ ಈ ನಮ್ಮ ಯುವ ಬಳಗ ಮುಂದಿನ ದಿನಗಳಲ್ಲಿ ಇನ್ನಷ್ಟು ಇದೇ ತರಹದ ಕಾರ್ಯವನ್ನು ಮಾಡುವ ಹೊಸ ಹುಮ್ಮಸ್ಸು ಬರುತ್ತದೆ. ಇರಲಿ ಇರುತ್ತದೆ ಎಂಬ ಆಶಾಭಾವನೆ ನಮ್ಮದು.
ಧನ್ಯವಾದಗಳೊಂದಿಗೆ..

       ಪ್ರವೀಣ ಕಾಗಾಲ.
      ಬೆಂಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ