ಶನಿವಾರ, ಜೂನ್ 30, 2018

ನ್ಯಾನೊ ಕಥೆ - 2


ಅವನು ಯಾವಾಗಲೂ Facebook, whatsapp, ಅಂತ ಅದರಲ್ಲಿಯೇ ಮುಳುಗಿರುತ್ತಿದ್ದ. ಇದರಿಂದ ಅವನ ಪೋಷಕರು ಚಿಂತಾಕ್ರಾಂತರಾಗಿದ್ದರು. ಮಗ ದುಡಿಯುವ ಸಮಯದಲ್ಲಿ ದುಡಿಯದೇ ಈ ರೀತಿ ಸಮಯ ವ್ಯರ್ಥ ಮಾಡುತ್ತಿರುವುದು ಅವರಿಗೆ ಸ್ವಲ್ಪವೂ ಹಿಡಿದಿರಲಿಲ್ಲ. ಏನಾದರೂ ಮಾಡಿ ಇದನ್ನು ಬಿಡಿಸಬೇಕು ಅಂತ ಉಪಾಯ ಮಾಡಿದರೂ ಆಗಲಿಲ್ಲ. ಒಂದು ದಿನ ಪೇಟೆಗೆ ಹೋದ ಇವರು ಮನೆಗೆ ಬರುವಾಗ ತೀವ್ರವಾಗಿ ಅಪಘಾತದಿಂದ ಗಾಯಾಳು ಆಗುತ್ತಾರೆ. ಮಗನಿಗೆ ವಿಷಯ ಗೊತ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು Facebook ಅಲ್ಲಿ status ಹಾಕಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವನಿಂದ ಸಹಾಯ ಪಡೆದ ಅನೇಕ ಜನ ರಕ್ತ ಕೊಡಲು ಬಂದಿದ್ದರು. ಅವರಲ್ಲಿ ಕೆಲವರ ರಕ್ತ ಪಡೆದು ಚಿಕಿತ್ಸೆ ನೀಡಿ ಕೆಲವು ದಿನಗಳ ಬಳಿಕ ಆಸ್ಪತ್ರೆಯಿಂದ ವಾಪಸ್ ಮನೆಗೆ ಬರುತ್ತಾರೆ.
ಆಗ ಅವನು ತಂದೆ ತಾಯಿಗಳ ಬಳಿ ಬಂದು ಹೇಳುತ್ತಾನೆ .. ನಾನು ಇಡೀ ದಿನ Facebook ಅಲ್ಲಿ ಇರೋದು ಇದೇ ರಕ್ತದಾನದ ಕೆಲಸಕ್ಕೆ.  ಇಂದು ನನ್ನಿಂದ ಎಷ್ಟೋ ಜನ ತಮ್ಮ ಪ್ರಾಣವನ್ನು ಉಳಿಸಿಕೊಂಡು ನೆಮ್ಮದಿಯಾಗಿದ್ದಾರೆ. ಅವರ ಆಶಿರ್ವಾದವೇ ನನಗೆ ಇಂದು ಶ್ರೀ ರಕ್ಷೆಯಾಗಿದೆ. ನಿಮಗೆ ಅಪಘಾತವಾದಾಗ ನಾನು ಹಾಕಿದ ಒಂದೇ ಸಂದೇಶಕ್ಕೆ ಇಂದು ಇಷ್ಟೊಂದು ಜನ ಬಂದು ನನ್ನ ಜೀವದ ಉಸಿರನ್ನು ಉಳಿಸಿದ್ದಾರೆ ಎಂದಾಗ ಅವರ ಕಣ್ಣಂಚಿನಲ್ಲಿ ನೀರು ಧರೆಗೆ ಬಿಳುತ್ತಾ ಇತ್ತು. ಮಗನ ಸಾಮಾಜಿಕ ಕಾರ್ಯಕ್ಕೆ ಮೆಚ್ಚಿ ಹರಸಿದರು

        ~ ಪ್ರವೀಣ ಕಾಗಾಲ. ಕುಮಟಾ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ