ಕರುನಾಡೆಂದರೆ ಕುಣಿಯುವ ನಾವು
ನಾ ಕನ್ನಡಿಗ ಎಂದರೆ ಕಿವಿಯು ನಿಮಿರುವುದು.
ಕರುನಾಡಿನ ಸಂಕಷ್ಟದ ಸಮಯದಿ
ಒಂದಾಗಿ ನಾವೆಲ್ಲ ಹೋರಾಡುವೆವು.
ನಾವೆಲ್ಲ ಕನ್ನಡಿಗರು
ಎಂದು ಅಭಿಮಾನ ಪಡುತ
ಕನ್ನಡಾಂಬೆಯ ಸಲುವಾಗಿ
ಜೀವ ತೊರೆಯುವೆವು.
ಕಷ್ಟದಲ್ಲಿರುವ ಜನರ
ಕೈ ಹಿಡಿಯುವೆವು ನಾವು.
ಬದುಕಿದ್ದಷ್ಟು ದಿನ ಕರುನಾಡಿನ
ಕನ್ನಡ ಭಾಷೆಯ ರಕ್ಷಣೆ ಮಾಡುತ
ನಾಡಗೀತೆಯ ಹಾಡುವೆವು.
ಕರುನಾಡಿನ ಏಳಿಗೆಗೆ ಶ್ರಮಿಸುತ
ಅನುದಿನವೂ ಕನ್ನಡದ ಸೇವೆಯ
ನಾವು ಮಾಡುವೆವು..
ಕನ್ನಡವೇ ನಮ್ಮ ಉಸಿರಾಗಿಹಿದು
ಕರುನಾಡಿನ ಹಿರಿಮೆಯ
ಜಗತ್ತಿಗೆ ಪಸರಿಸುವ
ಕೆಲಸವ ಸದಾ ಮಾಡುವೆವು
ನಾವೆಲ್ಲ ಅಭಿಮಾನದಿಂದ
ಹೇಳುವೆವು ಕನ್ನಡಿಗರೆಂದು..
~ ಪ್ರವೀಣ ಕಾಗಾಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ